✨ New Arrivals Just Dropped!Explore
ಚಾನ್ನೆ
HomeStore

ಚಾನ್ನೆ

ಚಾನ್ನೆ

ಚಾನ್ನೆ ಕಥಾಸಂಕಲನದ ಮೂಲಕ ಓದುಗರ ಗಮನ ಸೆಳೆಯುತ್ತಿರುವ ಮುದಿರಾಜ್ ಬಾಣದ್ ಬರಹದಲ್ಲಿ ಎದ್ದು ಕಾಣುವ ಅಂಶ: ಕಥಾವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಮತ್ತು ಅವರಿಗೆ ಸಹಜವಾಗಿ ಒಲಿದುಕೊಂಡಿರುವ ಪ್ರಾದೇಶಿಕ ಭಾಷೆಗಳಾಗಿವೆ. ಬದುಕಿನ ಸಣ್ಣಪುಟ್ಟ ಅನುಭವದಲ್ಲಿ ಹಿರಿದಾದುದನ್ನು ಕಾಣುವ ಬಯಕೆ, ಒಂದು ಕಾಲಘಟ್ಟದಲ್ಲಿ ಎದುರಾದ ಅಸಂಗತ ಅನುಭವಗಳಿಗೆ ಅರ್ಥ ಕೊಡುತ್ತ ಭಾವೋದ್ರೇಕವಿಲ್ಲದೆ ಹಿಡಿದಿಡುವ ತುಡಿತಗಳನ್ನು ಕೂಡ ಈ ಸಂಕಲನದಲ್ಲಿ ಕಾಣುತ್ತೇವೆ. ಇವನ್ನು 'ಆಗಲು' ಮತ್ತು 'ಬೆಳೆಯಲು' ಹಾತೊರೆವ ಕಥೆಗಳು ಎಂದು ಕರೆಯಲು ಬಯಸುವೆ. ಒಲಿದ ಪ್ರಾದೇಶಿಕ ಭಾಷಾಶೈಲಿ, ವಿಭಿನ್ನ ವಸ್ತು ಕಥಾಪರಿಸರಗಳು ಈಗಿರುವುದನ್ನು ಹಿಗ್ಗಿಸಿ ಆಗಬಲ್ಲ ಹಾಗೂ ಬೆಳೆಯಬಲ್ಲ ಅಪಾರ ಸಾಧ್ಯತೆಗಳನ್ನು ತಮ್ಮೊಳಗೆ ಅಡಗಿಸಿಕೊಂಡಿವೆ. ಅದಕ್ಕೆ ಕಥೆಗಾರನ ತಾದ್ಯಾತ್ಮತೆ, ಜನಪ್ರಿಯ ಸಂಸ್ಕೃತಿ ಹುಟ್ಟು ಹಾಕುವ ತಥಾಕಥಿತ ಸಿದ್ಧಮಾದರಿಗಳಾಚೆ ಬದುಕನ್ನು ನೋಡುವ, ದಾಖಲಿಸುವ ಅಪಾರ ತಾಳ್ಮೆಗಳು ಬಹುಮುಖ್ಯವಾಗುತ್ತವೆ. ಅಂತಹ ಸಾಮರ್ಥ್ಯದ ಬಳಿ ಸುಳಿದಾಡುತ್ತಿರುವ ಮುದಿರಾಜ್ ಆ ಸುಳಿಗೆ ಸಿಲುಕಿ ಅದರೊಳಗೆ ಒಂದಾಗಲಿ ಎಂದು ಹಾರೈಸುವೆ.

-ಕೇಶವ ಮಳಗಿ
$0.86
ಚಾನ್ನೆ
$0.86

ಚಾನ್ನೆ

ಚಾನ್ನೆ ಕಥಾಸಂಕಲನದ ಮೂಲಕ ಓದುಗರ ಗಮನ ಸೆಳೆಯುತ್ತಿರುವ ಮುದಿರಾಜ್ ಬಾಣದ್ ಬರಹದಲ್ಲಿ ಎದ್ದು ಕಾಣುವ ಅಂಶ: ಕಥಾವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಮತ್ತು ಅವರಿಗೆ ಸಹಜವಾಗಿ ಒಲಿದುಕೊಂಡಿರುವ ಪ್ರಾದೇಶಿಕ ಭಾಷೆಗಳಾಗಿವೆ. ಬದುಕಿನ ಸಣ್ಣಪುಟ್ಟ ಅನುಭವದಲ್ಲಿ ಹಿರಿದಾದುದನ್ನು ಕಾಣುವ ಬಯಕೆ, ಒಂದು ಕಾಲಘಟ್ಟದಲ್ಲಿ ಎದುರಾದ ಅಸಂಗತ ಅನುಭವಗಳಿಗೆ ಅರ್ಥ ಕೊಡುತ್ತ ಭಾವೋದ್ರೇಕವಿಲ್ಲದೆ ಹಿಡಿದಿಡುವ ತುಡಿತಗಳನ್ನು ಕೂಡ ಈ ಸಂಕಲನದಲ್ಲಿ ಕಾಣುತ್ತೇವೆ. ಇವನ್ನು 'ಆಗಲು' ಮತ್ತು 'ಬೆಳೆಯಲು' ಹಾತೊರೆವ ಕಥೆಗಳು ಎಂದು ಕರೆಯಲು ಬಯಸುವೆ. ಒಲಿದ ಪ್ರಾದೇಶಿಕ ಭಾಷಾಶೈಲಿ, ವಿಭಿನ್ನ ವಸ್ತು ಕಥಾಪರಿಸರಗಳು ಈಗಿರುವುದನ್ನು ಹಿಗ್ಗಿಸಿ ಆಗಬಲ್ಲ ಹಾಗೂ ಬೆಳೆಯಬಲ್ಲ ಅಪಾರ ಸಾಧ್ಯತೆಗಳನ್ನು ತಮ್ಮೊಳಗೆ ಅಡಗಿಸಿಕೊಂಡಿವೆ. ಅದಕ್ಕೆ ಕಥೆಗಾರನ ತಾದ್ಯಾತ್ಮತೆ, ಜನಪ್ರಿಯ ಸಂಸ್ಕೃತಿ ಹುಟ್ಟು ಹಾಕುವ ತಥಾಕಥಿತ ಸಿದ್ಧಮಾದರಿಗಳಾಚೆ ಬದುಕನ್ನು ನೋಡುವ, ದಾಖಲಿಸುವ ಅಪಾರ ತಾಳ್ಮೆಗಳು ಬಹುಮುಖ್ಯವಾಗುತ್ತವೆ. ಅಂತಹ ಸಾಮರ್ಥ್ಯದ ಬಳಿ ಸುಳಿದಾಡುತ್ತಿರುವ ಮುದಿರಾಜ್ ಆ ಸುಳಿಗೆ ಸಿಲುಕಿ ಅದರೊಳಗೆ ಒಂದಾಗಲಿ ಎಂದು ಹಾರೈಸುವೆ.

-ಕೇಶವ ಮಳಗಿ

Product Information

Shipping & Returns

Description

ಚಾನ್ನೆ ಕಥಾಸಂಕಲನದ ಮೂಲಕ ಓದುಗರ ಗಮನ ಸೆಳೆಯುತ್ತಿರುವ ಮುದಿರಾಜ್ ಬಾಣದ್ ಬರಹದಲ್ಲಿ ಎದ್ದು ಕಾಣುವ ಅಂಶ: ಕಥಾವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಮತ್ತು ಅವರಿಗೆ ಸಹಜವಾಗಿ ಒಲಿದುಕೊಂಡಿರುವ ಪ್ರಾದೇಶಿಕ ಭಾಷೆಗಳಾಗಿವೆ. ಬದುಕಿನ ಸಣ್ಣಪುಟ್ಟ ಅನುಭವದಲ್ಲಿ ಹಿರಿದಾದುದನ್ನು ಕಾಣುವ ಬಯಕೆ, ಒಂದು ಕಾಲಘಟ್ಟದಲ್ಲಿ ಎದುರಾದ ಅಸಂಗತ ಅನುಭವಗಳಿಗೆ ಅರ್ಥ ಕೊಡುತ್ತ ಭಾವೋದ್ರೇಕವಿಲ್ಲದೆ ಹಿಡಿದಿಡುವ ತುಡಿತಗಳನ್ನು ಕೂಡ ಈ ಸಂಕಲನದಲ್ಲಿ ಕಾಣುತ್ತೇವೆ. ಇವನ್ನು 'ಆಗಲು' ಮತ್ತು 'ಬೆಳೆಯಲು' ಹಾತೊರೆವ ಕಥೆಗಳು ಎಂದು ಕರೆಯಲು ಬಯಸುವೆ. ಒಲಿದ ಪ್ರಾದೇಶಿಕ ಭಾಷಾಶೈಲಿ, ವಿಭಿನ್ನ ವಸ್ತು ಕಥಾಪರಿಸರಗಳು ಈಗಿರುವುದನ್ನು ಹಿಗ್ಗಿಸಿ ಆಗಬಲ್ಲ ಹಾಗೂ ಬೆಳೆಯಬಲ್ಲ ಅಪಾರ ಸಾಧ್ಯತೆಗಳನ್ನು ತಮ್ಮೊಳಗೆ ಅಡಗಿಸಿಕೊಂಡಿವೆ. ಅದಕ್ಕೆ ಕಥೆಗಾರನ ತಾದ್ಯಾತ್ಮತೆ, ಜನಪ್ರಿಯ ಸಂಸ್ಕೃತಿ ಹುಟ್ಟು ಹಾಕುವ ತಥಾಕಥಿತ ಸಿದ್ಧಮಾದರಿಗಳಾಚೆ ಬದುಕನ್ನು ನೋಡುವ, ದಾಖಲಿಸುವ ಅಪಾರ ತಾಳ್ಮೆಗಳು ಬಹುಮುಖ್ಯವಾಗುತ್ತವೆ. ಅಂತಹ ಸಾಮರ್ಥ್ಯದ ಬಳಿ ಸುಳಿದಾಡುತ್ತಿರುವ ಮುದಿರಾಜ್ ಆ ಸುಳಿಗೆ ಸಿಲುಕಿ ಅದರೊಳಗೆ ಒಂದಾಗಲಿ ಎಂದು ಹಾರೈಸುವೆ.

-ಕೇಶವ ಮಳಗಿ