✨ New Arrivals Just Dropped!Explore
ಮಕ್ಕಳು ಓದಿದ ಟೀಚರ್ ಡೈರಿ
HomeStore

ಮಕ್ಕಳು ಓದಿದ ಟೀಚರ್ ಡೈರಿ

ಮಕ್ಕಳು ಓದಿದ ಟೀಚರ್ ಡೈರಿ

ಕಲಘಟಗಿಯ ವೈ.ಜಿ. ಭಗವತಿ ಅವರು ಮಕ್ಕಳ ಸಾಹಿತ್ಯದ ನಿರ್ಮಿತಿಯಲ್ಲಿ ಒಂದು ಒಳ್ಳೆಯ ಪರಿವರ್ತನೆ ಹಾಗೂ ವೇಗವನ್ನು ತಂದುಕೊಂಡು, ವಾಸ್ತವ ಮಾದರಿಯ ಕಥನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. 'ದೇವಮ್ಮನ ಲೋಟ' ಎನ್ನುವ ಅವರ ಹಿಂದಿನ ಕಥಾ ಸಂಕಲನವು ಸಾಮಾಜಿಕ ಅಂತರವು ಮಕ್ಕಳ ಮೇಲೆ ಮಾಡುವ ಪರಿಣಾಮಗಳನ್ನು ಚಿತ್ರಿಸುವ ಪ್ರಯತ್ನ ಮಾಡಿತ್ತು. 'ಸುಂದರಜ್ಜಿಯ ಮೊಮ್ಮಗನಂತೆ' ಎನ್ನುವ ಅವರ ಇನ್ನೊಂದು ಕೃತಿ ಕೂಡ ಗ್ರಾಮೀಣ ಭಾಗದ ಮಕ್ಕಳು ಅನುಭವಿಸುವ ಕೀಳರಿಮೆ ಹಾಗೂ ಪ್ರೋತ್ಸಾಹದ ಕೊರತೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿತ್ತು. 'ಮತ್ತೆ ಹೊಸ ಗೆಳೆಯರು' ಎಂಬ ಇವರ ಮೊದಲ ಮಕ್ಕಳ ಕಾದಂಬರಿಯಲ್ಲಿ ಮಕ್ಕಳ ಮನೋಲೋಕವನ್ನು ವಿಸ್ತಾರಗೊಳಿಸುವ ಹಂಬಲ ಕಾಣುತ್ತಿತ್ತು.

2021ನೇ ಸಾಲಿನ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದಿರುವ 'ಮಕ್ಕಳು ಓದಿದ ಟೀಚರ್ ಡೈರಿ' ಕೃತಿಯು ಒಂದು ರೀತಿಯಲ್ಲಿ ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ, ಮಕ್ಕಳ ಮನೋಭಿತ್ತಿಯನ್ನು ಒಂದು ವಿಶಾಲ ದೃಷ್ಟಿಕೋನದಲ್ಲಿ ಚಿತ್ರಿಸುವ ಪ್ರಯತ್ನ ಮಾಡುತ್ತದೆ. ಮಕ್ಕಳ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಸಂಘರ್ಷವನ್ನು ಇದು ಎದುರು ಮಾಡುತ್ತದೆ. ಎಳೆಯ ಹೃದಯಗಳಲ್ಲಿ ಕುದಿಯುತ್ತಿರುವ ಸಂಕಟ, ಅವರಲ್ಲಿ ಉಕ್ಕುವ ಸಂಭ್ರಮ ಹಾಗೂ ಅವರಲ್ಲಿ ಹೊಯ್ದಾಡುವ ಅನುಮಾನಗಳನ್ನು ಗಾಢವಾಗಿ ತೆರೆದಿಡುತ್ತದೆ.

ಈ ಕಾದಂಬರಿಯಲ್ಲಿ ಶಾಲಿನಿ ಎನ್ನುವ ತರುಣ ಶಾಲಾ ಶಿಕ್ಷಕಿಯ ಕಥೆಯಿದೆ. ಆಕೆ ಬಾಲ್ಯದಿಂದ ಬರೆಯುತ್ತ ಬಂದಿರುವ ಡೈರಿಯನ್ನು, ಆಕೆ ಊರಿಗೆ ಹೋದಾಗ ಅವಳಿಗೆ ಗೊತ್ತಿಲ್ಲದಂತೆ ಅವಳ ತರಗತಿಯ ನಾಲೈದು ವಿದ್ಯಾರ್ಥಿಗಳು ಓದುತ್ತ ಹೋಗುವುದು ಇಲ್ಲಿನ ಕಥಾವಸ್ತು. ಇದ್ದವರು-ಇಲ್ಲದವರು, ದೈಹಿಕವಾಗಿ ಊನಗೊಂಡವರು, ನಿರರ್ಗಳವಾಗಿ ಮಾತನಾಡಲು ಬಾರದವರು ಹೀಗೆ ಸಮಾಜದಲ್ಲಿ ಎಲ್ಲ ತರಹದ ಜನರೂ ಇದ್ದಾರೆ ಮತ್ತು ಎಲ್ಲರನ್ನೂ ಗೌರವಿಸಬೇಕು ಎಂಬ ಅಮೂಲ್ಯ ಪಾಠವನ್ನು ಇಲ್ಲಿನ ಮಕ್ಕಳು ಟೀಚರ್ ಡೈರಿಯ ಓದಿನಿಂದ ಕಲಿಯುತ್ತಾರೆ. ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವ ಹಾಗೂ ಅವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತೆ ನೋಡಿಕೊಳ್ಳುವ ತಾತ್ವಿಕ ನೋಟವೊಂದನ್ನು ಲೇಖಕರು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

— ಡಾ. ಬಸು ಬೇವಿನಗಿಡದ, ಧಾರವಾಡ

$1.19
ಮಕ್ಕಳು ಓದಿದ ಟೀಚರ್ ಡೈರಿ
$1.19

More Images

ಮಕ್ಕಳು ಓದಿದ ಟೀಚರ್ ಡೈರಿ - Image 2

ಮಕ್ಕಳು ಓದಿದ ಟೀಚರ್ ಡೈರಿ

ಕಲಘಟಗಿಯ ವೈ.ಜಿ. ಭಗವತಿ ಅವರು ಮಕ್ಕಳ ಸಾಹಿತ್ಯದ ನಿರ್ಮಿತಿಯಲ್ಲಿ ಒಂದು ಒಳ್ಳೆಯ ಪರಿವರ್ತನೆ ಹಾಗೂ ವೇಗವನ್ನು ತಂದುಕೊಂಡು, ವಾಸ್ತವ ಮಾದರಿಯ ಕಥನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. 'ದೇವಮ್ಮನ ಲೋಟ' ಎನ್ನುವ ಅವರ ಹಿಂದಿನ ಕಥಾ ಸಂಕಲನವು ಸಾಮಾಜಿಕ ಅಂತರವು ಮಕ್ಕಳ ಮೇಲೆ ಮಾಡುವ ಪರಿಣಾಮಗಳನ್ನು ಚಿತ್ರಿಸುವ ಪ್ರಯತ್ನ ಮಾಡಿತ್ತು. 'ಸುಂದರಜ್ಜಿಯ ಮೊಮ್ಮಗನಂತೆ' ಎನ್ನುವ ಅವರ ಇನ್ನೊಂದು ಕೃತಿ ಕೂಡ ಗ್ರಾಮೀಣ ಭಾಗದ ಮಕ್ಕಳು ಅನುಭವಿಸುವ ಕೀಳರಿಮೆ ಹಾಗೂ ಪ್ರೋತ್ಸಾಹದ ಕೊರತೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿತ್ತು. 'ಮತ್ತೆ ಹೊಸ ಗೆಳೆಯರು' ಎಂಬ ಇವರ ಮೊದಲ ಮಕ್ಕಳ ಕಾದಂಬರಿಯಲ್ಲಿ ಮಕ್ಕಳ ಮನೋಲೋಕವನ್ನು ವಿಸ್ತಾರಗೊಳಿಸುವ ಹಂಬಲ ಕಾಣುತ್ತಿತ್ತು.

2021ನೇ ಸಾಲಿನ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದಿರುವ 'ಮಕ್ಕಳು ಓದಿದ ಟೀಚರ್ ಡೈರಿ' ಕೃತಿಯು ಒಂದು ರೀತಿಯಲ್ಲಿ ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ, ಮಕ್ಕಳ ಮನೋಭಿತ್ತಿಯನ್ನು ಒಂದು ವಿಶಾಲ ದೃಷ್ಟಿಕೋನದಲ್ಲಿ ಚಿತ್ರಿಸುವ ಪ್ರಯತ್ನ ಮಾಡುತ್ತದೆ. ಮಕ್ಕಳ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಸಂಘರ್ಷವನ್ನು ಇದು ಎದುರು ಮಾಡುತ್ತದೆ. ಎಳೆಯ ಹೃದಯಗಳಲ್ಲಿ ಕುದಿಯುತ್ತಿರುವ ಸಂಕಟ, ಅವರಲ್ಲಿ ಉಕ್ಕುವ ಸಂಭ್ರಮ ಹಾಗೂ ಅವರಲ್ಲಿ ಹೊಯ್ದಾಡುವ ಅನುಮಾನಗಳನ್ನು ಗಾಢವಾಗಿ ತೆರೆದಿಡುತ್ತದೆ.

ಈ ಕಾದಂಬರಿಯಲ್ಲಿ ಶಾಲಿನಿ ಎನ್ನುವ ತರುಣ ಶಾಲಾ ಶಿಕ್ಷಕಿಯ ಕಥೆಯಿದೆ. ಆಕೆ ಬಾಲ್ಯದಿಂದ ಬರೆಯುತ್ತ ಬಂದಿರುವ ಡೈರಿಯನ್ನು, ಆಕೆ ಊರಿಗೆ ಹೋದಾಗ ಅವಳಿಗೆ ಗೊತ್ತಿಲ್ಲದಂತೆ ಅವಳ ತರಗತಿಯ ನಾಲೈದು ವಿದ್ಯಾರ್ಥಿಗಳು ಓದುತ್ತ ಹೋಗುವುದು ಇಲ್ಲಿನ ಕಥಾವಸ್ತು. ಇದ್ದವರು-ಇಲ್ಲದವರು, ದೈಹಿಕವಾಗಿ ಊನಗೊಂಡವರು, ನಿರರ್ಗಳವಾಗಿ ಮಾತನಾಡಲು ಬಾರದವರು ಹೀಗೆ ಸಮಾಜದಲ್ಲಿ ಎಲ್ಲ ತರಹದ ಜನರೂ ಇದ್ದಾರೆ ಮತ್ತು ಎಲ್ಲರನ್ನೂ ಗೌರವಿಸಬೇಕು ಎಂಬ ಅಮೂಲ್ಯ ಪಾಠವನ್ನು ಇಲ್ಲಿನ ಮಕ್ಕಳು ಟೀಚರ್ ಡೈರಿಯ ಓದಿನಿಂದ ಕಲಿಯುತ್ತಾರೆ. ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವ ಹಾಗೂ ಅವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತೆ ನೋಡಿಕೊಳ್ಳುವ ತಾತ್ವಿಕ ನೋಟವೊಂದನ್ನು ಲೇಖಕರು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

— ಡಾ. ಬಸು ಬೇವಿನಗಿಡದ, ಧಾರವಾಡ

Product Information

Shipping & Returns

Description

ಕಲಘಟಗಿಯ ವೈ.ಜಿ. ಭಗವತಿ ಅವರು ಮಕ್ಕಳ ಸಾಹಿತ್ಯದ ನಿರ್ಮಿತಿಯಲ್ಲಿ ಒಂದು ಒಳ್ಳೆಯ ಪರಿವರ್ತನೆ ಹಾಗೂ ವೇಗವನ್ನು ತಂದುಕೊಂಡು, ವಾಸ್ತವ ಮಾದರಿಯ ಕಥನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. 'ದೇವಮ್ಮನ ಲೋಟ' ಎನ್ನುವ ಅವರ ಹಿಂದಿನ ಕಥಾ ಸಂಕಲನವು ಸಾಮಾಜಿಕ ಅಂತರವು ಮಕ್ಕಳ ಮೇಲೆ ಮಾಡುವ ಪರಿಣಾಮಗಳನ್ನು ಚಿತ್ರಿಸುವ ಪ್ರಯತ್ನ ಮಾಡಿತ್ತು. 'ಸುಂದರಜ್ಜಿಯ ಮೊಮ್ಮಗನಂತೆ' ಎನ್ನುವ ಅವರ ಇನ್ನೊಂದು ಕೃತಿ ಕೂಡ ಗ್ರಾಮೀಣ ಭಾಗದ ಮಕ್ಕಳು ಅನುಭವಿಸುವ ಕೀಳರಿಮೆ ಹಾಗೂ ಪ್ರೋತ್ಸಾಹದ ಕೊರತೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿತ್ತು. 'ಮತ್ತೆ ಹೊಸ ಗೆಳೆಯರು' ಎಂಬ ಇವರ ಮೊದಲ ಮಕ್ಕಳ ಕಾದಂಬರಿಯಲ್ಲಿ ಮಕ್ಕಳ ಮನೋಲೋಕವನ್ನು ವಿಸ್ತಾರಗೊಳಿಸುವ ಹಂಬಲ ಕಾಣುತ್ತಿತ್ತು.

2021ನೇ ಸಾಲಿನ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದಿರುವ 'ಮಕ್ಕಳು ಓದಿದ ಟೀಚರ್ ಡೈರಿ' ಕೃತಿಯು ಒಂದು ರೀತಿಯಲ್ಲಿ ಅವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿ, ಮಕ್ಕಳ ಮನೋಭಿತ್ತಿಯನ್ನು ಒಂದು ವಿಶಾಲ ದೃಷ್ಟಿಕೋನದಲ್ಲಿ ಚಿತ್ರಿಸುವ ಪ್ರಯತ್ನ ಮಾಡುತ್ತದೆ. ಮಕ್ಕಳ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಸಂಘರ್ಷವನ್ನು ಇದು ಎದುರು ಮಾಡುತ್ತದೆ. ಎಳೆಯ ಹೃದಯಗಳಲ್ಲಿ ಕುದಿಯುತ್ತಿರುವ ಸಂಕಟ, ಅವರಲ್ಲಿ ಉಕ್ಕುವ ಸಂಭ್ರಮ ಹಾಗೂ ಅವರಲ್ಲಿ ಹೊಯ್ದಾಡುವ ಅನುಮಾನಗಳನ್ನು ಗಾಢವಾಗಿ ತೆರೆದಿಡುತ್ತದೆ.

ಈ ಕಾದಂಬರಿಯಲ್ಲಿ ಶಾಲಿನಿ ಎನ್ನುವ ತರುಣ ಶಾಲಾ ಶಿಕ್ಷಕಿಯ ಕಥೆಯಿದೆ. ಆಕೆ ಬಾಲ್ಯದಿಂದ ಬರೆಯುತ್ತ ಬಂದಿರುವ ಡೈರಿಯನ್ನು, ಆಕೆ ಊರಿಗೆ ಹೋದಾಗ ಅವಳಿಗೆ ಗೊತ್ತಿಲ್ಲದಂತೆ ಅವಳ ತರಗತಿಯ ನಾಲೈದು ವಿದ್ಯಾರ್ಥಿಗಳು ಓದುತ್ತ ಹೋಗುವುದು ಇಲ್ಲಿನ ಕಥಾವಸ್ತು. ಇದ್ದವರು-ಇಲ್ಲದವರು, ದೈಹಿಕವಾಗಿ ಊನಗೊಂಡವರು, ನಿರರ್ಗಳವಾಗಿ ಮಾತನಾಡಲು ಬಾರದವರು ಹೀಗೆ ಸಮಾಜದಲ್ಲಿ ಎಲ್ಲ ತರಹದ ಜನರೂ ಇದ್ದಾರೆ ಮತ್ತು ಎಲ್ಲರನ್ನೂ ಗೌರವಿಸಬೇಕು ಎಂಬ ಅಮೂಲ್ಯ ಪಾಠವನ್ನು ಇಲ್ಲಿನ ಮಕ್ಕಳು ಟೀಚರ್ ಡೈರಿಯ ಓದಿನಿಂದ ಕಲಿಯುತ್ತಾರೆ. ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವ ಹಾಗೂ ಅವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತೆ ನೋಡಿಕೊಳ್ಳುವ ತಾತ್ವಿಕ ನೋಟವೊಂದನ್ನು ಲೇಖಕರು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

— ಡಾ. ಬಸು ಬೇವಿನಗಿಡದ, ಧಾರವಾಡ

You may also like

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

NEW
Thumbnail 1

ರಹಮತ್ ತರೀಕೆರೆ

$0.65

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

NEW
Thumbnail 1

ಏನು ...? ಗಣಿತ ಅಂದ್ರಾ...?

$1.35